By admin on September 8, 2015
ಚಿತ್ರಕತೆ

ದೇವರಾಜ ಅರಸು (1915-1982) ಜನ್ಮಶತಮಾನೋತ್ಸವ ಬಿ. ವಿ. ರಾಮಮೂರ್ತಿ(1932-2004) ಆರ್. ಕೆ. ಲಕ್ಷ್ಮಣರಂತೆ ಕರ್ನಾಟಕ ಕಂಡ ಒಬ್ಬ ಶ್ರೇಷ್ಠ, ಅದ್ವಿತೀಯ, ಅಭಿಜಾತ ಕಾರ್ಟೂನಿಸ್ಟ್. ತಮ್ಮ ಅಂಕುಡೊಂಕಾದ, ಹರಿತ, ಖಚಿತ ರೇಖೆಗಳೊಂದಿಗೆ ನವಿರಾಗಿ ಕಚಗುಳಿಯಿಡುವ, ತಿಳಿಹಾಸ್ಯದೊಂದಿಗೆ ಪ್ರಹಾರ ಮಾಡುತ್ತಿದ್ದ ರಾಮಮೂರ್ತಿಯವರ ವ್ಯಂಗ್ಯಚಿತ್ರಗಳು ಬಹುಬೇಗ ಕನ್ನಡ ಜನರ ಮನಗೆದ್ದವು. ಆರಂಭದಲ್ಲಿ ಶೇಷಪ್ಪನವರ ‘ಕಿಡಿ’, ರಾಶಿಯವರ ‘ಕೊರವಂಜಿ’ ಕನ್ನಡ ಪತ್ರಿಕೆಗಳಲ್ಲಿ ವ್ಯಂಗ್ಯಚಿತ್ರ ಬರೆಯಲಾರಂಭಿಸಿ, ಕೊನೆಗೆ 1955 ರಲ್ಲಿ ‘ಡೆಕ್ಕನ್ ಹೆರಾಲ್ಡ್-ಪ್ರಜಾವಾಣಿ’ ಬಳಗವನ್ನು ಸೇರಿ ಕಳೆದ ಅರ್ಧಶತಮಾನದಿಂದ ಸಾಮಾನ್ಯ ಓದುಗರನ್ನು ರಂಜಿಸುತ್ತಾ, ರಾಜಕಾರಣಿಗಳನ್ನು […]
By admin on August 31, 2015
ವ್ಯಂಗ್ಯಚಿತ್ರ

ಚಿತ್ರಕೃಪೆ -ರತ್ನ ರಾಮಮೂರ್ತಿ
By admin on August 29, 2015
ಕಲೆ

ಬೆಂಗಳೂರಿನ ಸಾಂಸ್ಕೃತಿಕ ರಂಗದಲ್ಲಿ ದೃಶ್ಯ ಕಲೆಯ ಕಾಣಿಕೆ ದೊಡ್ಡದು. ಇಂತಹ ದೃಶ್ಯ ಕಲೆಯ ಬೆಳವಣಿಗೆಗೆ ಮುಖ್ಯವಾಗಿ ಮೂರು ಶಿಕ್ಷಣ ಸಂಸ್ಥೆಗಳು ತಮ್ಮದೇ ಆದ ವಿಶೇಷತೆಗಳಿಂದ ಕಲಾಕ್ಷೇತ್ರಕ್ಕೆ ಕೊಡುಗೆಯನ್ನು ನೀಡುತ್ತಿವೆ. ಒಂದು ಅ. ನ ಸುಬ್ಬರಾಯರ ಕಲಾಮಂದಿರ. ಎರಡು, ನಂಜುಂಡ ರಾವ್ ರವರ ಕರ್ನಾಟಕ ಚಿತ್ರಕಲಾ ಪರಿಷತ್. ಮೂರನೆಯದಾಗಿ, ಶೇಷಾದ್ರಿಪುರಂನಲ್ಲಿರುವ “ಕೆನ್ ಸ್ಕೂಲ್ ಆಫ್ ಆರ್ಟ್ಸ್“ ಎಂಬ ಹೆಸರಿನಲ್ಲೇ ನಾವಿನ್ಯತೆ ಹೊಂದಿರುವ ಈ ಕಲಾ ಸ್ಥಾವರವನ್ನು ಸ್ಥಾಪಿಸಿ ಬೆಳಸಿದವರು ನಾಡೋಜ ಆರ್. ಎಂ ಹಡಪದ್ (ರುದ್ರಪ್ಪ ಮುನಿಯಪ್ಪ ಹಡಪದ್) […]
By admin on August 27, 2015
ಶಿಲ್ಪಕಲೆ

ಒಂದು ಕಾಲದಲ್ಲಿ ಚಾಲುಕ್ಯರ ಪ್ರಾರಂಭದ ರಾಜಧಾನಿಯಾಗಿದ್ದ ಐಹೊಳೆಯು ಇಂದು ಬಾಗಲಕೋಟೆ ಜಿಲ್ಲೆಯ, ಬಾದಾಮಿ ತಾಲ್ಲೂಕಿನ ಒಂದು ಕುಗ್ರಾಮವಾಗಿದೆ. ಇದು ಬೆಂಗಳೂರಿನಿಂದ 483 ಕಿ.ಮೀ., ಬಾದಾಮಿಯಿಂದ 46 ಕಿ.ಮೀ. ಮತ್ತು ಪಟ್ಟದಕಲ್ಲಿನಿಂದ 17 ಕಿ.ಮೀ. ದೂರದಲ್ಲಿದೆ. ಈ ಗ್ರಾಮದಲ್ಲಿ ನಿಂತು ಕಣ್ಣು ಹಾಯಿಸಿದಲ್ಲೆಲ್ಲಾ ಬರೀ ದೇಗುಲಗಳೇ ಕಾಣುತ್ತವೆ. ನೂರಕ್ಕೂ ಹೆಚ್ಚಿನ ದೇಗುಲಗಳು ಇಲ್ಲಿವೆ. ಇಡೀ ಭಾರತದಲ್ಲಿ ಇಲ್ಲಿ ಕಂಡು ಬರುವಷ್ಟು ವಿಭಿನ್ನ ಶೈಲಿ ಮತ್ತು ವಿಭಿನ್ನ ತಳವಿನ್ಯಾಸ ಹೊಂದಿದ ಚಾಲುಕ್ಯ ದೇವಾಲಯಗಳು ಮತ್ತೆಲ್ಲೂ ಕಂಡು ಬರುವುದಿಲ್ಲ. ಆದ್ದರಿಂದಲೇ ಐಹೊಳೆಯನ್ನು […]